ಮನದಲ್ಲಿ ಮೂಡುವ ಭಾವಗಳು,ಶಬ್ದಗಳಲ್ಲಿ ಹೆಣೆದ ಸಾಲುಗಳು ಎರಡೂ ಕಾರಣವಿಲ್ಲದೇ ಹುಟ್ಟುವಂಥವು. ಅಂದ ಮೇಲೆ ಅವುಗಳ ಸುಂದರ ಜೋಡಣೆಯಿಂದಾದ ಕವನಕ್ಕೆ ಕಾರಣ ಬೇಕೇ?
ನಾನು ನಾವುಗಳ ಸೈದ್ಧಾಂತಿಕ ಸಮರದ ನಡುವೆ ನೆಮ್ಮದಿಯಿಲ್ಲದೆ ನಲುಗಿದೆ ಮನಸು,
ಆತ್ಮಸಾಕ್ಷಿ ಇಂದು ಮೂಕ ಪ್ರೇಕ್ಷಕ |
ಜೀವಿಸುವುದೇ ಜೀವನ ಎಂದುಕೊಂಡವನಿಗೆ
ಅರಿವಾಗುತಿದೆ,
ನಾನು ನನಗಾಗಿ ಜೀವಿಸುತ್ತೇನೆ, ನಾವುಗಳಿಗಾಗಿ ಜೀವನ ನಡೆಸುತ್ತೇನೆ
ಬಹುಶಃ ಎಲ್ಲರ ಬದುಕೂ ಇಷ್ಟೇ
No comments:
Post a Comment