ಮನದಲ್ಲಿ ಮೂಡುವ ಭಾವಗಳು,ಶಬ್ದಗಳಲ್ಲಿ ಹೆಣೆದ ಸಾಲುಗಳು ಎರಡೂ ಕಾರಣವಿಲ್ಲದೇ ಹುಟ್ಟುವಂಥವು. ಅಂದ ಮೇಲೆ ಅವುಗಳ ಸುಂದರ ಜೋಡಣೆಯಿಂದಾದ ಕವನಕ್ಕೆ ಕಾರಣ ಬೇಕೇ?
ಗೋಪಾಲನೋ ಗೊತ್ತು ಗುರಿಯಿಲ್ಲದ ಕೊಳನೂದುವ ಗೊಲ್ಲ, ನವಿಲು ಗರಿಯೇ ಅವನ ಆಸ್ತಿ
ಬೃಂದಾವನದಲಿ ರಾಧೆಯೊಂದಿಗೆ ರಾಸಲೀಲೆ,
ಗೋವಿಂದನೋ ಕರ್ತವ್ಯದ ಕಟ್ಟುಪಾಡಿನಲಿ ಕಪ್ಪುಗಟ್ಟಿದ ಕೃಷ್ಣ
ಅರಮನೆಯ ವೈಭೋಗ, ರುಕ್ಮಿಣಿಯ ಸಾಂಗತ್ಯ, ಕೇವಲ ಸಾಂಸಾರಿಕ ಸಂಕೋಲೆ
No comments:
Post a Comment